ಬುದ್ಧಿಮಾಂದ್ಯತೆ ಎಂದರೇನು?
ಅನಿರುದ್ಧನಿಗೆ ನಾಲ್ಕು ವರ್ಷವಾದರೂ ಇನ್ನೂ ನಡೆಯುತ್ತಿಲ್ಲ. ಅವನು ಕುಟುಂಬದವರು ಮತ್ತು ಕೆಲವು ಸ್ನೇಹಿತರನ್ನು ಮಾತ್ರ ಗುರುತು ಹಿಡಿಯುತ್ತಾನೆ. ತನ್ನ ಕಣ್ಣು, ಮೂಗು, ಬಾಯಿ ಮುಂತಾದ ಅಂಗಗಳನ್ನು ಗುರುತಿಸಲು ಅಥವಾ ಅರ್ಥಪೂರ್ಣ ಪದಗಳನ್ನು ಸೇರಿಸಿ ಮಾತನಾಡಲು ಕಷ್ಟ ಪಡುತ್ತಾನೆ. ಈ ರೀತಿಯ ಲಕ್ಷಣಗಳನ್ನು ಗಮನಿಸಿ ಮತ್ತು ಹಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಅವನಿಗೆ ಬುದ್ಧಿಮಾಂದ್ಯತೆ ಇರುವುದನ್ನು ಪತ್ತೆ ಮಾಡಲಾಯಿತು. ಆತನ ವಯಸ್ಸು ನಾಲ್ಕು ವರ್ಷವಾದರೂ ಬುದ್ಧಿ ಒಂದು ವರ್ಷದ ಮಗುವಿನಂತಿತ್ತು.
ಇದೊಂದು ಕಾಲ್ಪನಿಕ ಕಥೆ. ನಿಜ ಜೀವನದಲ್ಲಿ ಕಂಡುಬರುವ ಬುದ್ಧಿಮಾಂದ್ಯತೆಯನ್ನು ಅರ್ಥಮಾಡಿಕೊಳ್ಳಲು ಇದನ್ನು ರಚಿಸಲಾಗಿದೆ.
ಬುದ್ಧಿಮಾಂದ್ಯತೆಯು ಎಲ್ಲಾ ರೀತಿಯ ಬೆಳವಣಿಗೆಯನ್ನು ತಡವಾಗಿಸುತ್ತದೆ. ಬೆಳವಣಿಗೆಯ ನಾಲ್ಕು ವಿಭಾಗಗಳು: ಚಲನೆ (ದೇಹದ ಚಲನೆಯ ಮೇಲೆ ನಿಯಂತ್ರಣ), ಗ್ರಹಿಕೆ (ಯೋಚಿಸುವುದು, ಅರ್ಥಮಾಡಿಕೊಳ್ಳುವುದು, ಪರಿಸ್ಥಿತಿಗೆ ತಕ್ಕಂತೆ ವರ್ತಿಸುವುದು), ಸಮಾಜದಲ್ಲಿ ಬೆರೆಯುವುದು (ಜನರ ಜೊತೆ ಮಾತನಾಡುವುದು ಮತ್ತು ನಾಲ್ಕು ಜನರ ನಡುವೆ ಹೇಗೆ ವರ್ತಿಸಬೇಕೆಂದು ಕಲಿಯುವುದು) ಮತ್ತು ಭಾಷೆ (ಇತರರು ಹೇಳುವುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಮಾತನಾಡಲು ಕಲಿಯುವುದು); ಈ ಸಮಸ್ಯೆ ಇರುವವರಲ್ಲಿ ಈ ನಾಲ್ಕು ರೀತಿಯ ಬೆಳವಣಿಗೆಯೂ ನಿಧಾನವಾಗುತ್ತದೆ.
ಬುದ್ಧಿಮಾಂದ್ಯತೆ ಒಂದು ಮಾನಸಿಕ ಖಾಯಿಲೆಯಲ್ಲ. ಬದಲಾಗಿ ಇದು ಮಾನಸಿಕ ಬೆಳವಣಿಗೆಯಲ್ಲಿ ಕಂಡುಬರುವ ನಿಧಾನ ಗತಿ ಮತ್ತು ಬಾಲ್ಯದಿಂದಲೇ ಕಂಡುಬರುತ್ತದೆ.
ಮಾನವರು18 ವರ್ಷದವರೆಗೂ ಕ್ರಮಬದ್ಧವಾಗಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಹೊಂದುತ್ತಾರೆ. ಉದಾಹರಣೆಗೆ, ಹೆಚ್ಚಿನ ಮಕ್ಕಳು ಹುಟ್ಟಿದ ಸುಮಾರು 15ನೇ ತಿಂಗಳ ಆಸುಪಾಸಿನಲ್ಲಿ ಕೆಲವು ಪದಗಳನ್ನು ಉಚ್ಛರಿಸುತ್ತವೆ, ನಡೆಯಲು ಆರಂಭಿಸುತ್ತವೆ ಮಕ್ಕಳು ಈ ಹಂತವನ್ನು ತಲುಪದಿದ್ದರೆ, ಬೆಳವಣಿಗೆಯಲ್ಲಿ ಅಥವಾ ಮಾನಸಿಕ ಸಾಮರ್ಥ್ಯದಲ್ಲಿ ಗಮನಾರ್ಹವಾದ ಕೊರತೆ ಕಂಡುಬಂದರೆ ಅಥವಾ ಮಗು ಐಕ್ಯೂ (IQ) ಪರೀಕ್ಷೆಯಲ್ಲಿ ಶೇ.85ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದರೆ, ಆಗ ಮಗು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದೆ ಎಂದರ್ಥ.
ಬುದ್ಧಿಮಾಂದ್ಯತೆಯ ಲಕ್ಷಣಗಳು
ಮಗು ಹುಟ್ಟುವಾಗಲೇ ಬುದ್ಧಿಮಾಂದ್ಯತೆಯ ಕೆಲವು ಲಕ್ಷಣಗಳನ್ನು ಗುರುತಿಸಬಹುದು. ಉದಾಹರಣೆಗೆ ಒಂಭತ್ತು ತಿಂಗಳ ಮೊದಲೇ ಜನಿಸಿದ ಮಗು, ಜನಿಸಿದಾಗ ಕಡಿಮೆ ತೂಕ ಹೊಂದಿರುವ ಶಿಶು, ಜನಿಸಿದಾಗ ಉಸಿರಾಟದ ತೊಂದರೆ ಇರುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ತೀವ್ರ ಬುದ್ಧಿಮಾಂದ್ಯತೆ ಇದ್ದರೆ ಅದನ್ನು 6 ರಿಂದ 12 ತಿಂಗಳ ವಯಸ್ಸಿನಲ್ಲಿ ಗುರುತಿಸಬಹುದು. ಸಣ್ಣ ಪ್ರಮಾಣದ ಬುದ್ಧಿಮಾಂದ್ಯತೆಯನ್ನು ಗುರುತಿಸಲು 2 ವರ್ಷವಾಗಬಹುದು. ಕೆಲವರಿಗೆ ಬಾಲ್ಯದಲ್ಲಿ ಮಿದುಳಿಗೆ ಸಂಭವಿಸಿದ ಹಾನಿಯಿಂದಲೂ ಬುದ್ಧಿಮಾಂದ್ಯತೆ ಬರಬಹುದು.
ಬುದ್ಧಿಮಾಂದ್ಯತೆ ಇರುವವರು ಕೆಳಗಿನ ಕೆಲವು ಅಥವಾ ಎಲ್ಲ ಲಕ್ಷಣಗಳನ್ನು ತೋರಿಸಬಹುದು:
ಯಾವಾಗ ನೀವು ಜಾಗೃತರಾಗಬೇಕು?
ಬುದ್ಧಿಮಾಂದ್ಯತೆಯೊಂದಿಗೆ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆಗಳು
ಬುದ್ಧಿಮಾಂದ್ಯತೆ ಹೊಂದಿರುವ ಹೆಚ್ಚಿನ ಮಕ್ಕಳು ಉಳಿದಂತೆಲ್ಲ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರುತ್ತಾರೆ. ಆದರೆ ಇತರರಿಗಿಂತ ಅವರ ಬುದ್ಧಿವಂತಿಕೆ ಕಡಿಮೆ ಇರುತ್ತದೆ. ಬುದ್ಧಿಮಾಂದ್ಯತೆಯೊಂದಿಗೆ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ವರ್ತನೆ ಸಮಸ್ಯೆ: ಬುದ್ಧಿಮಾಂದ್ಯತೆ ಹೊಂದಿರುವ ವ್ಯಕ್ತಿಯಲ್ಲಿನ ಚಡಪಡಿಕೆ ಮಟ್ಟ, ದುಡುಕುತನ, ಕೋಪ, ಹೆಚ್ಚಿರುತ್ತದೆ. ಇದನ್ನು ನಿಭಾಯಿಸುವಾಗ ಆರೈಕೆದಾರರಿಗೆ ಒತ್ತಡ ಉಂಟುಮಾಡಬಹುದು. ಇದರ ಬಗ್ಗೆ ಮಾನಸಿಕ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.
ಸೆಡೆತಗಳು: ಬುದ್ಧಿಮಾಂದ್ಯತೆ ಹೊಂದಿರುವ ವ್ಯಕ್ತಿಯಲ್ಲಿ ಸೆಡೆತಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಸೆಡೆತ ಇಡೀ ದೇಹವನ್ನು, ದೇಹದ ಕೆಲ ಭಾಗ, ಅಥವಾ ಒಂದು ಜಳುಕಿನಿಂದ ವ್ಯಕ್ತಿ ದೇಹದ ಸಮತೋಲನ ಕಳೆದುಕೊಂಡು ಕೆಳಗೆ ಬೀಳಬಹುದು. ಸೆಡೆತವನ್ನು ಔಷಧದಿಂದ ಸುಲಭವಾಗಿ ನಿಯಂತ್ರಣದಲ್ಲಿಡಬಹುದು.
ಸಂವೇದನೆಯ ತೊಂದರೆಗಳು: ಬುದ್ಧಿಮಾಂದ್ಯತೆ ಹೊಂದಿರುವ ಶೇ.10 ರಷ್ಟು ವ್ಯಕ್ತಿಗಳು ದೃಷ್ಟಿ ಮತ್ತು ಶ್ರವಣ ತೊಂದರೆಗಳನ್ನು ಹೊಂದಿರುತ್ತಾರೆ. ಈ ತೊಂದರೆಗಳನ್ನು ಕನ್ನಡಕ ಅಥವಾ ಕಣ್ಣಿನ ಶಸ್ತ್ರ ಚಿಕಿತ್ಸೆಯಿಂದ ಪರಿಹರಿಸಿಕೊಳ್ಳಬಹುದು.
ಸೂಚನೆ: ಬುದ್ಧಿಮಾಂದ್ಯತೆಯೊಂದಿಗೆ ಸೆರೆಬ್ರಲ್ ಪಾಲ್ಸಿ, ಮಾತಿನ ಸಮಸ್ಯೆ, ಆಟಿಸಂ ಮುಂತಾದ ಬೆಳವಣಿಗೆಯ ತೊಂದರೆಗಳು ಕಾಣಿಸಿಕೊಳ್ಳಬಹುದು.
ಬುದ್ಧಿಮಾಂದ್ಯತೆ ಬರಲು ಕಾರಣಗಳು
ಬುದ್ಧಿಮಾಂದ್ಯತೆಗೆ ನೂರಕ್ಕಿಂತ ಹೆಚ್ಚು ಕಾರಣಗಳಿವೆ. ಈ ಕೆಳಗೆ ಹೇಳಲಾದವು ಕೇವಲ ಸೂಚಕಗಳು ಮಾತ್ರ.
ಅವಧಿ ಪೂರ್ವ ಜನನ ಅಥವಾ ಪ್ರಸವಪೂರ್ವದ ಕಾರಣಗಳು:
ಜನನದ ವೇಳೆ ಅಥವಾ ಹೆರಿಗೆ ಸಮಯದಲ್ಲಿನ ಕಾರಣಗಳು:
ಮೂರನೆ ತ್ರೈಮಾಸಿಕದಲ್ಲಿ
ಪ್ರಸವದ ಸಮಯದಲ್ಲಿ
ಜನಿಸಿದ 4 ವಾರಗಳ ಬಳಿಕ ಅಥವಾ ನವಜಾತ ಕಾರಣಗಳು:
ಶೈಶವ ಅಥವಾ ಬಾಲ್ಯದಲ್ಲಿ
ಬುದ್ಧಿಮಾಂದ್ಯತೆಗೆ ಚಿಕಿತ್ಸೆ
ಬುದ್ಧಿಮಾಂದ್ಯತೆಯನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಸೂಕ್ತ ಬೆಂಬಲ ಮತ್ತು ಆರೈಕೆಯಿಂದ ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ವ್ಯಕ್ತಿ ಆರೋಗ್ಯವಾಗಿ ಮತ್ತು ಸ್ವತಂತ್ರವಾಗಿ ಬದುಕಬಹುದು. ಸರಿಯಾದ ಆರೈಕೆ ಸಿಗದೆ ಮಕ್ಕಳಲ್ಲಿ ಅನಾರೋಗ್ಯ ಮತ್ತು ವರ್ತನೆಯ ಸಮಸ್ಯೆ ಕಾಣಿಸಬಹುದು. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆ ಆರೈಕೆ ನೀಡಬೇಕು.
ಬುದ್ಧಿಮಾಂದ್ಯತೆ ಹೊಂದಿರುವವರ ಆರೈಕೆ
ಬುದ್ಧಿಮಾಂದ್ಯತೆ ಜೀವನಪರ್ಯಂತ ಇರುವ ಸ್ಥಿತಿಯಾಗಿದೆ. ಬುದ್ಧಿಮಾಂದ್ಯತೆ ಹೊಂದಿರುವ ವ್ಯಕ್ತಿಯ ಆರೈಕೆ ಒತ್ತಡದಿಂದ ಕೂಡಿದ್ದು ಅದಕ್ಕೆ ಸಹನೆ ಅತ್ಯಗತ್ಯ. ಸಂತಸದ ಸಂಗತಿಯೆಂದರೆ ಸಾಕಷ್ಟು ಸಂಪನ್ಮೂಲಗಳು ಹಾಗೂ ಸಹಾಯ ಗುಂಪುಗಳು ಆರೈಕೆದಾರರ ನೆರವಿಗೆ ಬರುತ್ತವೆ ಮತ್ತು ಅವರ ಪ್ರೀತಿಪಾತ್ರರರು ಸ್ವತಂತ್ರವಾಗಿ ಆರೋಗ್ಯಯುತ ಜೀವನ ನಡೆಸುವ ಭರವಸೆ ನೀಡುತ್ತವೆ.
ಸಮಾನತೆ ಎಂಬ ಪರಿಕಲ್ಪನೆ ಸ್ಕ್ಯಾಂಡಿನೇವಿಯನ್ ದೇಶಗಳಲ್ಲಿ ಹುಟ್ಟಿದ್ದು. ಇತರ ಸಾಮಾನ್ಯ ಜನರಿಗೆ ಲಭ್ಯವಿರುವ ದೈನಂದಿನ ಬದುಕಿನ ಅವಶ್ಯಕತೆಗಳು ಬುದ್ಧಿಮಾಂದ್ಯತೆ ಹೊಂದಿರುವ ವ್ಯಕ್ತಿಗಳಿಗೂ ದೊರಕುವಂತಹ ಪೂರಕ ವಾತಾವರಣವನ್ನು ಸೃಷ್ಟಿಸುತ್ತದೆ. ಗೌರವ ಮತ್ತು ಘನತೆಯೊಂದಿಗೆ ತಮ್ಮ ಬದುಕು ಸಾಗಿಸುವುದು ಬುದ್ಧಿಮಾಂದ್ಯತೆ ಹೊಂದಿದ ವ್ಯಕ್ತಿಗಳ ಹಕ್ಕಾಗಿದೆ. ಅವರನ್ನು ಸಮಾಜದ ಭಾಗವಾಗಿ ಪರಿಗಣಿಸುವುದು ಅತ್ಯಂತ ಪ್ರಮುಖ ಸಂಗತಿ. ಅವರ ವಿರುದ್ಧ ತಾರತಮ್ಯ ಮಾಡುವುದು ತರವಲ್ಲ.
ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ವ್ಯಕ್ತಿಯ ಆರೈಕೆದಾರರು ಸಾಕಷ್ಟು ಒತ್ತಡ ಎದುರಿಸುತ್ತಾರೆ. ಸ್ನೇಹಿತರು, ಕುಟುಂಬ ಮತ್ತು ಸಮುದಾಯದಿಂದ ಎದುರಾಗುವ ಕಳಂಕ, ದಿನನಿತ್ಯ ಆರೈಕೆ, ವೈಯಕ್ತಿಕ ಕೆಲಸ ಮಾಡಲು ಸಮಯ ಸಿಗದೆ ಇರುವುದು, ಅಥವಾ ಹಣಕಾಸಿನ ಸಮಸ್ಯೆಗಳಿಂದ ಒತ್ತಡ ಉಂಟಾಗುತ್ತದೆ.
ಆರೈಕೆದಾರರು ತಮ್ಮ ಸ್ವಂತ ಯೋಗಕ್ಷೇಮಕ್ಕೆ ಸಮಯ ನೀಡುವುದು ಅತ್ಯಗತ್ಯ. ಬುದ್ಧಿಮಾಂದ್ಯತೆಯ ಬಗ್ಗೆ ಹೆಚ್ಚು ತಿಳಿದುಕೊಂಡು, ವ್ಯಕ್ತಿಯ ಸುತ್ತ ಸಹಜ ವಾತಾವರಣ ಇರುವಂತೆ ನೋಡಿಕೊಳ್ಳುವ ಬಗ್ಗೆ ಇತರ ಆರೈಕೆದಾರರ ಸಲಹೆ ಪಡೆಯಬಹುದು.
ಆರೈಕೆದಾರರಿಗೆ ಸಲಹೆಗಳು:
ಕೆಲವು ಗಿಡಮೂಲಿಕೆಗಳು ಬುದ್ಧಿಮಾಂದ್ಯತೆಯನ್ನು ಗುಣಪಡಿಸಬಹುದು ಎಂಬ ಹಲವು ನಂಬಿಕೆಗಳಿವೆ. ಈ ನಂಬಿಕೆಗಳು ಸಂಪೂರ್ಣವಾಗಿ ಸುಳ್ಳು. ಬುದ್ಧಿಮಾಂದ್ಯತೆಯನ್ನು ಗುಣಪಡಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ ಮಗುವಿನ ವಿಕಲತೆಯ ಮಟ್ಟವನ್ನು ತಿಳಿಯಲು ಮತ್ತು ಮಾನಸಿಕ ಸ್ಥಿತಿಯ ಮೌಲ್ಯಮಾಪನ ಮಾಡಿ ಸಾಮರ್ಥ್ಯ ಮತ್ತು ಮಿತಿಗಳನ್ನು ತಿಳಿದುಕೊಳ್ಳಲು ವೈದ್ಯಕೀಯ ನೆರವು ಪಡೆಯುವುದು ಮುಖ್ಯ.
ಪ್ರಾಥಮಿಕ ಹಂತದಲ್ಲಿನ ನೆರವು:
ಬುದ್ಧಿಮಾಂದ್ಯತೆಯನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಮಾಡಿ ಮಗುವಿನಲ್ಲಿ ಸುರಕ್ಷತಾ ಭಾವವನ್ನು ಉಂಟುಮಾಡುವ ಪ್ರೋತ್ಸಾಹದಾಯಕ ಹಾಗೂ ಪ್ರೀತಿಪೂರ್ವಕ ವಾತಾವರಣ ಕಲ್ಪಿಸಿದರೆ ಮಗುವಿಗೆ ಸಹಾಯವಾಗುತ್ತದೆ.
ಶಿಕ್ಷಣ:
ಬುದ್ಧಿಮಾಂದ್ಯತೆ ಹೊಂದಿದ ಮಕ್ಕಳಿಗೆ ಓದು ಬರಹ, ಶಿಸ್ತು ಮತ್ತು ಸಾಮಾಜಿಕ ಕೌಶಲ್ಯ, ದೈನಂದಿನ ಕೆಲಸ ಮಾಡುವ ಬಗೆ, , ಈ ಎಲ್ಲವನ್ನೂ ತಾಳ್ಮೆಯಿಂದ ಕಲಿಸಿಕೊಡಬೇಕು. ಅಲ್ಪ ಬುದ್ಧಿಮಾಂದ್ಯತೆ ಹೊಂದಿದ ಮಕ್ಕಳನ್ನು ವಿಶೇಷ ಶಾಲೆಯ ಬದಲು ಸಾಮಾನ್ಯ ಶಾಲೆಗೆ ಕಳಿಸಬೇಕುx. ತೀವ್ರವಾದ ಬುದ್ಧಿಮಾಂದ್ಯತೆ ಹೊಂದಿರುವವರು ಅವರಿಗಾಗಿಯೇ ಸಿದ್ಧಪಡಿಸಿದ ವಿಶೇಷ ಶಾಲೆಗೆ ಸೇರಿಸಬಹುದು. ಪಾಲಕರು ಯಾವುದೇ ಶಾಲೆಯನ್ನು ಆಯ್ದುಕೊಂಡರೂ, ಮಗುವಿಗೆ ಶೈಕ್ಷಣಿಕ ಅನುಭವ ನೀಡುವುದು ಅತ್ಯಂತ ಮಹತ್ವದ್ದು.
ವೃತ್ತಿಪರ ತರಬೇತಿ:
ಬುದ್ಧಿಮಾಂದ್ಯತೆ ಹೊಂದಿರುವವರ ಸಾಮರ್ಥ್ಯವನ್ನು ನಾವು ಕಡೆಗಣಿಸುತ್ತೇವೆ. ಆದರೆ ಇವರಿಗೆ ವೃತ್ತಿಪರ ತರಬೇತಿ ನೀಡಿ ಅವರನ್ನು ಕೆಲಸಕ್ಕೆ ತಯಾರು ಮಾಡಬಹುದು.
ಬುದ್ಧಿಮಾಂದ್ಯತೆಯನ್ನು ತಡೆಗಟ್ಟಬಹುದೆ?
ಬುದ್ಧಿಮಾಂದ್ಯತೆಯನ್ನು ಈ ಕೆಲವು ರೀತಿಯಲ್ಲಿ ತಡೆಗಟ್ಟಬಹುದು:
ವಿಶ್ವ ಆರೋಗ್ಯ ಸಂಸ್ಥೆಗಾಗಿ (WHO) ಬುದ್ಧಿಮಾಂದ್ಯತೆಯ ಬಗ್ಗೆ ರೂಪಿಸಲಾಗಿರುವ ದಾಖಲೆಯನ್ನು ಆಧರಿಸಿ ಈ ಲೇಖನವನ್ನು ರಚಿಸಲಾಗಿದೆ. ಇದರ ಮೂಲ ಲೇಖಕರು ಬೆಂಗಳೂರಿನ ನಿಮ್ಹಾನ್ಸ್ನ ಡಾ.ಸತೀಶ್ ಗಿರಿಮಾಜಿ, ಬಾಂಗ್ಲಾದೇಶದ ಪ್ರೊಟೊಬೋಂದಿ ಫೌಂಢೇಶನ್ನಿನ ಡಾ.ಸುಲ್ತಾನಾ ಎಸ್ ಜಮಾನ್, ಶ್ರೀಲಂಕಾದ ಸುಸಿತ ಸುವಸೇಥಾ ಪೇರೆಂಟ್ಸ್ ಅಸೋಸಿಯೇಷನ್ನಿನ ಡಾ.ಪಿ.ಎಂ ವಿಜೇತುಂಗ,ಮತ್ತು ಬ್ಯಾಂಕಾಕ್ನ ರಾಜಾನುಕಲ್ ಆಸ್ಪತ್ರೆಯ ಡಾ.ಉದೋಮ್ ಪೆಜರಸಂಗಮ್.