ಪ್ರಶ್ನೆ: ಮಾನಸಿಕ ಆರೋಗ್ಯ ಎಂದರೇನು?
ಮಾನಸಿಕ ಆರೋಗ್ಯ ಎಂದರೆ ಮನಸ್ಸು ನೆಮ್ಮದಿಯಿಂದಿರುವುದು. ಮನಸ್ಸು ಪ್ರಶಾಂತವಾಗಿದ್ದು, ನಮ್ಮ ಆಲೋಚನೆಗಳು, ಭಾವನೆಗಳು, ನಿರ್ಧಾರಗಳು ಎಲ್ಲವೂ ಪರಿಸ್ಥಿತಿಗೆ ಅಥವಾ ವಾಸ್ತವಿಕತೆಗೆ ತಕ್ಕಂತೆ ಇರುತ್ತದೆ. ಈ ಸ್ಥಿತಿಯಲ್ಲಿ ನಮಗೆ ಯಾವುದೇ ಅಹಿತ ಭಾವ, ನೋವು, ದುಃಖ, ಕೋಪ, ಭಯ ಇರುವುದಿಲ್ಲ. ಇಂತಹ ಮನೋಸ್ಥಿತಿಯನ್ನು ಮಾನಸಿಕ ಆರೋಗ್ಯ ಎನ್ನಬಹುದು.
ಪ್ರಶ್ನೆ: ಮಾನಸಿಕ ಅಸ್ವಸ್ಥತೆಯ ಲಕ್ಷಣಗಳೇನು? ಇದಕ್ಕೆ ಚಿಕಿತ್ಸೆ ಅಗತ್ಯ ಎಂದು ಸೂಚಿಸುವ ಸಂಜ್ಞೆಗಳು ಯಾವವು?
ಪ್ರಶ್ನೆ: ವೈದ್ಯರ ಸಹಾಯವನ್ನು ಪಡೆದುಕೊಳ್ಳುವಲ್ಲಿ ಜನರು ಎದುರಿಸಬಹುದಾದ ಸಮಸ್ಯೆಗಳಾವವು?
ಪ್ರಶ್ನೆ: ಮಾನಸಿಕ ಸಮಸ್ಯೆ ಇರುವವರು ಸಹಾಯ ಪಡೆಯಲು ಇಚ್ಛಿಸಿದರೂ ಅವರಿಗೆ ಸಹಾಯ ಸಿಗದೇ ಇರುವುದಕ್ಕೆ ಏನು ಕಾರಣ?
ಪ್ರಶ್ನೆ: ಭೂತ-ಪ್ರೇತಗಳು, ಮೂಢನಂಬಿಕೆಗಳು ಮತ್ತು ಧಾರ್ಮಿಕ ಆಚರಣೆಗಳು ಜನರಿಗೆ ಸಹಾಯ ಮಾಡುವ ಬದಲಾಗಿ ಹಾನಿ ಮಾಡಬಹುದೆ?
ದೆವ್ವ, ಭೂತ, ಪಿಶಾಚಿಗಳು ನಮ್ಮ ಕಲ್ಪನೆಯಷ್ಟೆ. ಸತ್ತಮೇಲೆ ನಮ್ಮ ದೇಹ, ಮಿದುಳು, ಮನಸ್ಸು ಎಲ್ಲಾ ಅಳಿದುಹೋಗುತ್ತವೆ. ಸಿನಿಮಾ, ಟಿವಿ ಮಾಧ್ಯಮಗಳಲ್ಲಿ ಮನರಂಜನೆಗಾಗಿ ಮನುಷ್ಯರಿಗೆ ವೇಷ ಹಾಕಿ ದೆವ್ವ ಎಂದು ತೋರಿಸುತ್ತಾರೆ ಅಷ್ಟೆ.
ಜನ ತಮ್ಮ ಸಮಸ್ಯೆಗಳಿಗೆ, ಅನಾರೋಗ್ಯಕ್ಕೆ, ಗ್ರಹಚಾರ ಅಥವಾ ಮಾಟ-ಮಂತ್ರ ಕಾರಣ ಎಂದು ನಂಬುತ್ತಾರೆ. ಈಗೀಗ ಮಾಧ್ಯಮಗಳಲ್ಲಿ ಈ ರೀತಿಯ ತಪ್ಪು ನಂಬಿಕೆಗಳನ್ನು ಹುಟ್ಟಿಸುವ ಜನರ ಸೈನ್ಯವೇ ಕಾಣಿಸಿಕೊಳ್ಳುತ್ತಿದೆ. ಮಾಟಮಂತ್ರದಿಂದ ಇನ್ನೊಬ್ಬರಿಗೆ ಕೆಡಕು ಮಾಡುವ ಶಕ್ತಿ ಮನುಷ್ಯನಿಗಿಲ್ಲ. ಒಳ್ಳೆಯದಾಗಲಿ, ಕೆಟ್ಟದಾಗಲಿ ಅದಕ್ಕೆ ನಾವೇ ಜವಾಬ್ದಾರರು.
ಪ್ರಶ್ನೆ: ಈ ಕುರಿತ ಜನರ ಮನಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಯಾವ ರೀತಿ ಕೆಲಸ ಮಾಡಬಹುದು?
ಜನರು ಈ ರೀತಿಯ ಅವೈಜ್ಞಾನಿಕ ಮೂಢನಂಬಿಕೆಗಳನ್ನು ಬಿಟ್ಟು ವೈಜ್ಞಾನಿಕವಾಗಿ ಆಲೋಚಿಸಬೇಕು. ಪ್ರತಿಯೊಂದು ಸಮಸ್ಯೆಗೂ ನಿರ್ದಿಷ್ಟ ಕಾರಣ ಮತ್ತು ಪರಿಹಾರ ಏನು ಎಂಬುದನ್ನು ವಿಚಾರ ಮಾಡಬೇಕು. ತಮ್ಮ ಸ್ವಸಾಮರ್ಥ್ಯದಲ್ಲಿ ವಿಶ್ವಾಸವಿಡಬೇಕು. ಯಾವುದೇ ಖಾಯಿಲೆ ಬರಲಿ ವೈದ್ಯರ ಹತ್ತಿರ ಹೋಗಿ ಅವರು ಸೂಚಿಸಿದ ಚಿಕಿತ್ಸೆ ತೆಗೆದುಕೊಳ್ಳಬೇಕು. ಪರ್ಯಾಯ ಪದ್ಧತಿಗಳಲ್ಲಿರುವ ಮ್ಯಾಜಿಕ್ ರೂಪದ ಪರಿಹಾರಗಳಿಂದ ಖಾಯಿಲೆ ಗುಣ ಮಾಡಲು ಸಾಧ್ಯವಿಲ್ಲ.
ಪ್ರಶ್ನೆ: ಮಾನಸಿಕ ಸಮಸ್ಯೆ ಬರಲು ನಿರ್ದಿಷ್ಟ ಕಾರಣಗಳಿದೆಯೇ?
ದೇಹದ ಖಾಯಿಲೆಗಳು ಹೇಗೆ ನಿರ್ದಿಷ್ಟ ಕಾರಣಗಳಿಂದ ಬರುತ್ತವೆಯೋ, ಹಾಗೆಯೇ ಮಾನಸಿಕ ಖಾಯಿಲೆ ಬರಲು ನಿರ್ದಿಷ್ಟ ಕಾರಣಗಳು ಈ ಕೆಳಗಿನಂತಿವೆ:
ಪ್ರಶ್ನೆ: ಮಾನಸಿಕ ಆರೋಗ್ಯದ ಕುರಿತು ಜನ ಸೂಕ್ತ ತಿಳುವಳಿಕೆಯನ್ನು ಹೊಂದುವುದು ಯಾಕೆ ಅವಶ್ಯಕ?
ಮಾನಸಿಕ ಖಾಯಿಲೆಗಳು ಬರಲು ನಿರ್ದಿಷ್ಟ ಕಾರಣಗಳಿರುವುದರಿಂದ ಅದನ್ನು ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯವಿದೆ. ಮನೆಯವರು ಖಾಯಿಲೆ ತೀವ್ರವಾಗುವವರೆಗೂ ಕಾಯದೆ ಖಾಯಿಲೆಯ ಲಕ್ಷಣವನ್ನು ಆರಂಭದಲ್ಲಿಯೇ ಗುರುತಿಸಲು ಸಾಧ್ಯವಾಗಬೇಕು. ಬಟ್ಟೆ ಸರಿಯಾಗಿ ಹಾಕಿಕೊಳ್ಳದೇ ಇರುವುದು, ಕೂದಲು ಕೆದರಿರುವುದು, ಬೀದಿ ಸುತ್ತುವುದು, ಇವೆಲ್ಲಾ ಮಾನಸಿಕ ಖಾಯಿಲೆಯ ಕೊನೆಯ ಹಂತಗಳು.
ಪ್ರಶ್ನೆ: ಮನೋವೈದ್ಯರನ್ನು ಯಾವಾಗ ಕಾಣಬೇಕು?
ಮೇಲೆ ತಿಳಿಸಿರುವ ಮಾನಸಿಕ ಸಮಸ್ಯೆಗಳ ಲಕ್ಷಣಗಳು ಕಂಡುಬಂದಾಗ ’ಇದು ಮಾನಸಿಕ ಖಾಯಿಲೆ ಇರಬಹುದೇ?’ ಎಂದು ಮೊದಲು ಪತ್ತೆ ಮಾಡಿ, ದೃಢಪಡಿಸಿಕೊಳ್ಳಬೇಕು. ಇದಕ್ಕಾಗಿ ಕುಟುಂಬ ವೈದ್ಯರನ್ನೇ ಕಾಣಬಹುದು. ಸಣ್ಣ ಮಟ್ಟದಲ್ಲಿರುವ ಯಾವುದೇ ಮಾನಸಿಕ ಖಾಯಿಲೆಗಳಿಗೆ ಅವರು ಖಿನ್ನತೆ ನಿವಾರಕ ಔಷಧಿಗಳನ್ನು ಕೊಡಬಹುದು ಅಥವಾ ಆಪ್ತಸಮಾಲೋಚನೆಯ ಮೂಲಕ ಸಾಂತ್ವನ ಹೇಳಬಹುದು. ಅವರಿಗೆ ಸಾಧ್ಯವಿಲ್ಲವೆಂದರೆ ಮನೋವೈದ್ಯರಿಗೆ ಶಿಫಾರಸು ಮಾಡಬಹುದು.
ಹೇಗೆ ಮಧುಮೇಹವನ್ನು ಬೇಗ ಪತ್ತೆ ಮಾಡಿದರೆ ಅದನ್ನು ನಿಯಂತ್ರಿಸಬಹುದೋ, ಹಾಗೆಯೇ ಮಾನಸಿಕ ಖಾಯಿಲೆಗಳಿಗೆ ಬೇಗ ಚಿಕಿತ್ಸೆ ಅಥವಾ ಮಧ್ಯಸ್ತಿಕೆ ಆರಂಭಗೊಂಡರೆ ಬೇಗ ಖಾಯಿಲೆ ವಾಸಿಯಾಗುತ್ತದೆ.
ಪ್ರಶ್ನೆ: ಮನೋವೈದ್ಯರನ್ನು ಎಲ್ಲಿ ಕಾಣಬಹುದು?
ಕರ್ನಾಟಕದಲ್ಲಿ, ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ, ಖಾಸಗಿಯಾಗಿ ಅಭ್ಯಾಸ ಮಾಡುವ ಅಥವಾ ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುವ ಮನೋವೈದ್ಯರಿದ್ದಾರೆ. ದೊಡ್ಡಾಸ್ಪತ್ರೆಗಳಲ್ಲಿ ಅಥವಾ ವೈದ್ಯಕೀಯ ಕಾಲೇಜುಗಳಲ್ಲಿ ಮನೋವೈದ್ಯಕೀಯ ವಿಭಾಗ ಇದ್ದೇ ಇರುತ್ತದೆ. ಕೆಲವು ತಾಲೂಕು ಕೇಂದ್ರಗಳಲ್ಲಿಯೂ ಈಗ ಮನೋವೈದ್ಯರು ಲಭ್ಯರಿದ್ದಾರೆ. ಈಗ ಎಲ್ಲೆಡೆ ಮಾನಸಿಕ ರೋಗಗಳ ಬಗ್ಗೆ ಮಾಹಿತಿ ಕೂಡ ಲಭ್ಯವಿದೆ.
ಪ್ರಶ್ನೆ: ನಾವು ಮಾನಸಿಕ ಖಾಯಿಲೆ ಹೊಂದಿದ ಜನರಿಗೆ ಬೆಂಬಲವನ್ನು ಯಾವ ರೀತಿಯಲ್ಲಿ ನೀಡಬಹುದು?
ಪ್ರಶ್ನೆ: ಮನೋರೋಗ ಇದ್ದವರು ಸಹಜ ಬದುಕು ನಡೆಸಲು ಸಾಧ್ಯವೇ?
ವ್ಯಕ್ತಿಯನ್ನು ಪ್ರೀತಿ ವಿಶ್ವಾಸಗಳಿಂದ ನೋಡಿಕೊಂಡು, ಅವರು ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಟ್ಟರೆ ಖಾಯಿಲೆ ಬೇಗ ವಾಸಿಯಾಗುತ್ತದೆ.
ಮನೋರೋಗ ಗುಣವಾದ ನಂತರ ಮದುವೆ ಆಗಲು, ಮಕ್ಕಳನ್ನು ಪಡೆಯಲು, ಕೆಲಸ ಮಾಡಲು ಯಾವುದೇ ಅಡ್ಡಿ ಇಲ್ಲ. ಸಮಸ್ಯೆ ಇದ್ದ ಅನೇಕ ವ್ಯಕ್ತಿಗಳು ವಿಜ್ಞಾನಿಗಳಾಗಿದ್ದಾರೆ, ವೈದ್ಯರಾಗಿದ್ದಾರೆ, ಶಿಕ್ಷಕರಾಗಿದ್ದಾರೆ, ಉದ್ಯಮಿಗಳಾಗಿದ್ದಾರೆ. ನಿಮ್ಮ ಮನಸ್ಸು ಚೆನ್ನಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು.