ಚಿಕಿತ್ಸೆಯಲ್ಲಿ, ಮುಖ್ಯವಾಗಿ ವಾಕ್ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯು ವ್ಯಕ್ತಿಗೆ ಆತ/ಆಕೆಯ ಯೋಚನೆಗಳು, ಭಾವನೆಗಳು ಮತ್ತು ನಡವಳಿಕೆ ಹಾಗೂ ಅವುಗಳಿಗೆ ಕಾರಣವಾದ ಅಂಶಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ. ಒಮ್ಮೆ ವ್ಯಕ್ತಿಯು ತನ್ನ ಯೋಚನೆ ಮತ್ತು ಭಾವನೆಗಳನ್ನು ಅರಿತುಕೊಂಡ ಮೇಲೆ ಚಿಕಿತ್ಸಕರು ಅವರಿಗೆ ತಮ್ಮ ಭಾವನಾತ್ಮಕ ವಿಷಯಗಳನ್ನು ಸರಿಯಾಗಿ ನಿರ್ವಹಿಸುವ ಕೌಶಲ್ಯಗಳನ್ನು ಕಲಿಸಿಕೊಡುತ್ತಾರೆ.
ಹೆಚ್ಚಿನ ಚಿಕಿತ್ಸೆಗಳು ಸಮಸ್ಯೆಗಳನ್ನು ಪರಿಹರಿಸಲು ಗಮನ ಹರಿಸುತ್ತವೆ ಮತ್ತು ನಿರ್ದಿಷ್ಟ ಉದ್ದೇಶಗಳನ್ನು ಹೊಂದಿರುತ್ತವೆ. ಇವು ವ್ಯಕ್ತಿಯ ಸಮಸ್ಯೆಗೆ ಕಾರಣವಾಗುವ ಆಂತರಿಕ, ಭಾವನಾತ್ಮಕ ವಿಷಯಗಳನ್ನು ನಿರ್ವಹಿಸುತ್ತವೆ. ಅವುಗಳ ಪ್ರಗತಿ ಅಳೆಯಲು ಸುಲಭವಾಗುವಂತೆ ಈ ಗುರಿಯನ್ನು ಚಿಕ್ಕ ಚಿಕ್ಕ ಉದ್ದೇಶಗಳಾಗಿ ವಿಭಜಿಸಲಾಗುತ್ತದೆ. ಚಿಕಿತ್ಸಕರು ರೋಗಿಗಳಿಗೆ ಅವರ ಯೋಚನಾ ಲಹರಿ ಬದಲಾಯಿಸಿಕೊಂಡು ಈ ಗುರಿಗಳನ್ನು ಮುಟ್ಟಲು ಸಹಾಯ ಮಾಡುತ್ತಾರೆ.
ಹಲವಾರು ಪ್ರಯೋಜನಗಳ ಹೊರತಾಗಿಯೂ ಜನರು ಇಂತಹ ಚಿಕಿತ್ಸೆಗಳು ದುಬಾರಿಯೆಂಬ ತಪ್ಪು ಕಲ್ಪನೆಯಿಂದ ಇವುಗಳ ಪ್ರಯೋಜನ ಪಡೆಯಲು ಹಿಂಜರಿಯುತ್ತಾರೆ. ಈ ನಿಟ್ಟಿನಲ್ಲಿ ಜನರು ತಿಳಿಸುವ ಕೆಲವು ಸಾಮಾನ್ಯ ಸಂಗತಿಗಳೆಂದರೆ:
ಅಲ್ಲದೇ, ಚಿಕಿತ್ಸೆಯ ನಂತರ ನೀವು ಬದಲಾಗಬಲ್ಲಿರಿ ಎಂಬ ಬಗ್ಗೆ ಚಿಕಿತ್ಸಕರು ಯಾವುದೇ ಭರವಸೆ ನೀಡುವುದಿಲ್ಲ. ಚಿಕಿತ್ಸೆಯು ರೋಗಿ ಮತ್ತು ಚಿಕಿತ್ಸಕರ ಸಹ ಪ್ರಯತ್ನ. ಕೆಲವೊಮ್ಮೆ ಅವರಿಬ್ಬರ ನಡುವೆ ಉತ್ತಮ ಸಂಬಂಧವಿರುವುದಿಲ್ಲ. ಇದರಿಂದ ಕೆಲವು ಕೇಸುಗಳ ಪ್ರಗತಿಯು ನಿಧಾನವಾಗಬಹುದು, ಪ್ರಗತಿಯೇ ಸಾಧ್ಯವಾಗದಿರಬಹುದು ಅಥವಾ ರೋಗಿಯು ಇನ್ನೊಬ್ಬ ಚಿಕಿತ್ಸಕನನ್ನು ಹುಡುಕಬಹುದು. ಕೆಲವೊಮ್ಮೆ ರೋಗಿಯು ಹಲವಾರು ಚಿಕಿತ್ಸಕರನ್ನು ಭೇಟಿ ಮಾಡಿ ತಮಗೆ ಸರಿಹೊಂದುವ ಚಿಕಿತ್ಸಕರನ್ನು ಪಡೆಯಬೇಕಾಗುತ್ತದೆ. ಈ ಕಾರಣಗಳನ್ನು ನೋಡಿದರೆ ಚಿಕಿತ್ಸೆಯು ಪ್ರಯೋಜನಕಾರಿಯೆಂಬ ಭರವಸೆಯೂ ಇಲ್ಲದೇ ಏಕೆ ಆಪ್ತಸಮಾಲೋಚನೆಗೆ ಅಷ್ಟೊಂದು ಹಣ ನೀಡಬೇಕು? ಎಂದೆನಿಸುತ್ತದೆ.
ಆದರೆ, ಚಿಕಿತ್ಸೆಯನ್ನು ಪಡೆಯದ ರೋಗಿಗಳಿಗಿಂತ ಚಿಕಿತ್ಸೆಯನ್ನು ಪಡೆದ ಹೆಚ್ಚಿನ ಜನರು ಸುಧಾರಿಸಿದ್ದಾರೆ ಎಂಬ ಅಧ್ಯಯನವು ಇದಕ್ಕೆ ಉತ್ತರ ನೀಡುತ್ತದೆ. ಇದು ದುಬಾರಿಯೆನಿದರೂ ರೋಗಿಯು ಏಕೆ ಚಿಕಿತ್ಸೆಯನ್ನು ಪಡೆಯಬೇಕು ಎಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ:
ಈ ಅಂಶಗಳನ್ನು ಪರಿಗಣಿಸಿದಾಗ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆಯು ಪ್ರಯೋಜನಕಾರಿಯಾಗಿದ್ದು, ಬೆಲೆಗೆತಕ್ಕ ಪ್ರತಿಫಲ ನೀಡುತ್ತದೆ ಎಂಬುದನ್ನು ತಿಳಿಯಬಹುದು. ಇಲ್ಲಿ ಮುಖ್ಯವಾಗಿ, ವ್ಯಕ್ತಿಗೆ ತಾನು ಸುಧಾರಿಸಬೇಕೆಂಬ ಬಯಕೆಯಿರಬೇಕು. ವ್ಯಕ್ತಿಯಿಂದ ವ್ಯಕ್ತಿಗೆ ಹಣದ ಮೌಲ್ಯದ ಪರಿಗಣನೆ ಬೇರೆಯಾಗಿರುವುದರಿಂದ ಮೇಲೆ ಹೇಳಿರುವ ಪ್ರಯೋಜನಗಳನ್ನು ಹಣದ ದೃಷ್ಟಿಯಿಂದಲೇ ನೋಡುವುದು ಸಾಧ್ಯವಿಲ್ಲ. ಆದ್ದರಿಂದ ಚಿಕಿತ್ಸೆಯು ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳ ಸುಧಾರಣೆಗೆ ನೆರವಾಗಿದೆ ಎನ್ನಬಹುದು.