ಕುಟುಂಬದಲ್ಲಿ ಯಾರಾದರೂ ಆತ್ಮಹತ್ಯೆಗೆ ಶರಣಾದರೆ, ಅದು ಆ ಕುಟುಂಬದ ಮೇಲೆ ಬೀರುವ ಪರಿಣಾಮ ಭೀಕರವಾದುದು
ಒಂದು ಕುಟುಂಬದಲ್ಲಿ ಯಾರಾದರೂ ಆತ್ಮಹತ್ಯೆಗೆ ಶರಣಾದರೆ, ಅದು ಆ ಕುಟುಂಬದ ಮೇಲೆ ಬೀರುವ ಪರಿಣಾಮ ಭೀಕರವಾದುದು. ಮುಖ್ಯವಾಗಿ ಹಿತೈಶಿಗಳು ಅಥವಾ ಪೋಷಕರು ಈ ಆತ್ಮಹತ್ಯೆ ಕುರಿತು ನಾನಾ ಬಗೆಯಲ್ಲಿ ಯೋಚಿಸಬಹುದು. ತೀವ್ರ ದುಃಖ ಎದುರಿಸಲು ಅವರಿಗೆ ಕಷ್ಟಕರವಾಗಬಹುದು ಅಥವಾ ಸಾಧ್ಯವಾಗದೆ ಇರಬಹುದು. ನೋವು ಕಾಡಬಹುದು. ‘ನನಗೇಕೆ ಹೀಗಾಯಿತು?’. ‘ನಾನೇಕೆ ಆತನ/ಅವಳ ಮನಃಶಾಂತಿ ಅಥವಾ ಆತ್ಮಹತ್ಯೆ ಸಂಜ್ಞೆಗಳನ್ನು ಗುರುತಿಸಲಿಲ್ಲ’ ಅನ್ನಿಸಬಹುದು. ‘ಯಾಕೆ ಅವನು/ಅವಳು ಆತ್ಮಹತ್ಯೆಗೆ ಪ್ರಯತ್ನಿಸುವ ಮುನ್ನ ನನಗೆ ಕರೆ ಮಾಡಲಿಲ್ಲ?’ ಎನ್ನಿಸಬಹುದು. ‘ನಾನು ಅವನ/ಅವಳ ಉತ್ತಮ ಅಪ್ಪ/ಅಮ್ಮ ಅಥವಾ ಪೋಷಕನಾಗಿರಲಿಲ್ಲ’ ಎಂಬ ತಪ್ಪಿತಸ್ಥ ಮನೋಭಾವ ಹುಟ್ಟಬಹುದು. ಪ್ರತಿಯೊಂದು ಆತ್ಮಹತ್ಯೆ ಕನಿಷ್ಟ ಪಕ್ಷ ಆರು ಜನರ ಮೇಲೆ ಪರಿಣಾಮ ಬೀರುತ್ತದೆ. ಪ್ರಮುಖವಾಗಿ ಕುಟುಂಬದ ಸದಸ್ಯರು, ಸಹೋದ್ಯೋಗಿಗಳು, ನೆರೆಹೊರೆಯವರು, ಸಹಪಾಠಿಗಳು ಅಥವಾ ಹತ್ತಿರದ ಸ್ನೇಹಿತರ ಮೇಲೆ ಪರಿಣಾಮ ಬೀರುತ್ತದೆ.
ನೊಂದ ಕುಟುಂಬದಲ್ಲಿನ ಭಾವನೆಗಳು
ಕೆಳಗೆ ಕೊಟ್ಟಿರುವಂಥ ಹಂತಗಳು ಆತ್ಮಹತ್ಯೆಯ ನಂತರ ಮನೆಯವರು ಮತ್ತು ಹತ್ತಿರದವರು ಅನುಭವಿಸುವ ದುಃಖದ ಹಂತಗಳಾಗಿರುತ್ತವೆ. ಅದು ಕ್ಷಣಿಕವಾಗಿರಬಹುದು ಅಥವಾ ಧೀರ್ಘ ಕಾಲದವರೆಗೆ ಇರಬಹುದು. ಹೀಗಾಗಿ ಇಂಥ ಭಾವನೆಗಳನ್ನು ಎಚ್ಚರದಿಂದ ಹಾಗು ತಾಳ್ಮೆಯಿಂದ ಚಿಕಿತ್ಸೆಗೆ ಒಳಪಡಿಸಬೇಕು.
ಆಘಾತ (ಶಾಕ್)
ಆತ್ಮಹತ್ಯೆಯಿಂದ ಬದುಕುಳಿದವರು ಅಥವಾ ಆತ್ಮಹತ್ಯೆ ಮಾಡಿಕೊಂಡವರಿಗೆ ಹತ್ತಿರದವರ ತಕ್ಷಣದ ದೈಹಿಕ ಮತ್ತು ಭಾವನಾತ್ಮಕ ಪ್ರತಿಕ್ರಿಯೆ ಆಘಾತ(ಶಾಕ್)ದಿಂದ ಕೂಡಿರುತ್ತದೆ.
ಆತ್ಮಹತ್ಯೆಯಿಂದ ನೊಂದ ಕುಟುಂಬಕ್ಕೆ
ಡಾ.ಮನೋಜ್ ಶರ್ಮಾ, ಸಹಾಯಕ ಪ್ರಾಧ್ಯಾಪಕರು, ಕ್ಲಿನಿಕಲ್ ಸೈಕಾಲಜಿ, ನಿಮ್ಹಾನ್ಸ್