ಕೆಲವು ಬಗೆಯ ದೈಹಿಕ ಅನಾರೋಗ್ಯಗಳಲ್ಲಿಯೂ ಖಿನ್ನತೆಯ ಲಕ್ಷಣಗಳು ಕಂಡುಬರುವುದುಂಟು.
ಆಯಾಸ, ತಪ್ಪಿತಸ್ಥ ಮನೋಭಾವ, ನಿಷ್ಪ್ರಯೋಜಕತೆಯ ಅಳುಕು, ಕಿರಿಕಿರಿ, ನಿದ್ರಾಹೀನತೆ, ಹಸಿವಾಗದಿರುವಿಕೆ, ಆಹಾರ ಸೇರದೆ ಇರುವುದು, ದೈನಂದಿನ ಚಟುವಟಿಕೆಗಳಲ್ಲಿ ನಿರಾಸಕ್ತಿ, ವಿಷಾದ ಮನೋಭಾವ – ಇವೆಲ್ಲವೂ ಖಿನ್ನತೆಯ ಗುಣ ಲಕ್ಷಣಗಳು. ಕೆಲವೊಮ್ಮೆ ವ್ಯಕ್ತಿಯು ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಾಗ ಇವು ಕಾಣಿಸಿಕೊಳ್ಳುವುದುಂಟು. ಕೆಲವು ಸಂದರ್ಭಗಳಲ್ಲಿ ಖಿನ್ನತೆಯು ಸ್ವತಃ ರೋಗವಾಗಿರದೆ, ಮತ್ತೊಂದು ರೋಗದ ಲಕ್ಷಣವಾಗಿರುತ್ತದೆ.
ನಿಮ್ಹಾನ್ಸ್ ನ ಸೈಕಿಯಾಟ್ರಿಕ್ ರಿಹ್ಯಾಬಿಲಿಟೇಶನ್ ಸರ್ವಿಸಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಕೃಷ್ಣ ಪ್ರಸಾದ್ ಹೇಳುವಂತೆ, “ದೈಹಿಕ ಆರೋಗ್ಯ ಹಾಗೂ ಖಿನ್ನತೆಯ ನಡುವೆ ಸಂಬಂಧವಿದೆ. ಬೇಗ ಸುಸ್ತಾಗುವುದು, ಮೈಕೈ ನೋವು ಮೊದಲಾದ ಖಿನ್ನತೆಯ ಲಕ್ಷಣಗಳಂತೆ ತೋರುವ ಸಂಗತಿಗಳು ದೈಹಿಕ ಕಾಯಿಲೆಯ ಲಕ್ಷಣಗಳಾಗಿರುತ್ತವೆ. ದೇಹದಲ್ಲಿ ಇರಬಹುದಾದ ನ್ಯೂನತೆಗಳಿಂದ ಹೀಗಾಗುತ್ತದೆ.
ಹೈಪೋಥೈರಾಯ್ಡಿಸಮ್, ಅನೀಮಿಯಾ, ವಿಟಮಿನ್ ಕೊರತೆಗಳೇ ಮೊದಲಾದ ದೇಹಾರೋಗ್ಯ ಸಮಸ್ಯೆಗಳು ಇರುವಾಗ ಇಂಥ ಗುಣಲಕ್ಷಣಗಳು ಕಂಡುಬರುತ್ತವೆ”. ನೀವು ಕಾಣುವ ವೈದ್ಯರು (ಫಿಸಿಶಿಯನ್ ಅಥವಾ ಸೈಕಿಯಾಟ್ರಿಸ್ಟ್) ನಿಮ್ಮ ಖಿನ್ನತೆಯ ಲಕ್ಷಣಗಳನ್ನು ಕೇಳಿದರೆ ನಿಮಗೆ ಯಾವುದೇ ಬಗೆಯ ದೈಹಿಕ ಅನಾರೋಗ್ಯ ಇರುವುದನ್ನು ಅಲ್ಲಗಳೆಯುವ ಸಾಧ್ಯತೆಯೇ ಹೆಚ್ಚು.
ಕೆಲವು ಸಂಶೋಧನೆಗಳು ಖಿನ್ನತೆಯ ಲಕ್ಷಣಗಳನ್ನು ತೋರುವ ದೈಹಿಕ ಅನಾರೋಗ್ಯಗಳನ್ನು ಪಟ್ಟಿ ಮಾಡಿದ್ದು, ಅವು ಇಲ್ಲಿವೆ:
ರೋಗಿಯಲ್ಲಿ ಖಿನ್ನತೆ ಯಾವ ಪ್ರಮಾಣದಲ್ಲಿದೆ ಎಂದು ಅಳೆಯಲು ಮಾನಸಿಕ ಆರೋಗ್ಯ ತಜ್ಞರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳರೆಡರ ಕುಲಂಕುಶ ಪರಿಶೀಲನೆ ನಡೆಸುತ್ತಾರೆ. ದೈಹಿಕ ಪರಿಶೀಲನೆಯಲ್ಲಿ ಬಾಡಿ ಮಾಸ್ ಇಂಡೆಕ್ಸ್ (ಭೌತಿಕ ದ್ರವ್ಯರಾಶಿ ಸೂಚಿ) ಮಾಪನ, ಪಲ್ಸ್ ಹಾಗೂ ರಕ್ತದೊತ್ತಡದ ಪ್ರಮಾಣ, ಉಸಿರಾಟದ ಪ್ರಮಾಣ, ಮತ್ತಿತರ ದೈಹಿಕ ಕ್ರಿಯೆಗಳನ್ನು ಅಭ್ಯಸಿಸುತ್ತಾರೆ. ಹಾಗೂ ನಿಮಗೆ ಏನಾದರೂ ದೈಹಿಕ ಕಾಯಿಲೆ ಇದೆಯೇ ಎಂದು ಪತ್ತೆ ಹಚ್ಚಲು ರಕ್ತ ಪರೀಕ್ಷೆ ಮಾಡಿಸಲು ಕೂಡಾ ಸೂಚಿಸುತ್ತಾರೆ.
ಹೀಗೆ ಸೂಚಿಸುವ ಬ್ಲಡ್ ಟೆಸ್ಟ್’ನಲ್ಲಿ ಈ ಕೆಳಗಿನ ಅಂಶಗಳ ಮಾಪನ ಮಾಡಲಾಗುತ್ತದೆ:
ಮೇಲೆ ಹೇಳಿದ ಕಾಯಿಲೆಗಳಲ್ಲಿ ಬಹುಪಾಲು ಸುಲಭ ಚಿಕಿತ್ಸೆಯಿಂದ ಗುಣ ಆಗುವಂಥವು. ಅದಕ್ಕಾಗಿ ನೀವು ರಕ್ತ ಪರೀಕ್ಷೆಯ ನಂತರ ಜನರಲ್ ಫಿಸಿಶಿಯನ್ ಅಥವಾ ಸ್ಪೆಶಲಿಸ್ಟ್’ಗಳನ್ನು ಭೇಟಿ ಮಾಡಿ ಮುಂದುವರೆಯಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸೂಕ್ತ ಚಿಕಿತ್ಸೆ ದೊರೆತ ಬಳಿಕವೂ ನಿಮ್ಮಲ್ಲಿ ಅವೇ ಗುಣಲಕ್ಷಣಗಳು ಕಂಡುಬಂದರೆ, ಆಗ ನೀವು ಮಾನಸಿಕ ಆರೋಗ್ಯ ಪರಿಣಿತರನ್ನು ಸಂಪರ್ಕಿಸುವ ಅಗತ್ಯ ಬೀಳುತ್ತದೆ.